ಕಾಸರಗೋಡು | ಬೈಕ್, ಜೀಪು ನಡುವೆ ಅಪಘಾತ: SFI ಕಾರ್ಯಕರ್ತ ಮೃತ್ಯು
ಕಾಸರಗೋಡು : ಬೈಕ್ ಮತ್ತು ಜೀಪು ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಜಾಲ್ಸೂರು ಚೆರ್ಕಳ ರಸ್ತೆಯ ಬೋವಿಕ್ಕಾನದಲ್ಲಿ ಗುರುವಾರ ರಾತ್ರಿ ನಡೆದಿದೆ.
ಬೋವಿಕ್ಕಾನ ದಿಂದ ಕಲ್ಲು ಕಂಡದ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಮಲ್ಲ ಕಲ್ಲುಕಂಡದ ಅಖಿಲ್ (22) ಮೃತ ಪತ್ತವನು. ಅಖಿಲ್ ಎಸ್ ಎಫ್ ಐ ಕಾರ್ಯ ಕರ್ತ ನಾಗಿದ್ದನು.
ಗಂಭೀರ ಗಾಯಗೊಂಡ ಅಖಿಲ್ ನನ್ನು ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಳಿಲ್ಲ. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ




