ಮಂಗಳೂರು: ಕಚೇರಿ ಸ್ಟೋರ್ ರೂಮ್ ನಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಸಿಬ್ಬಂದಿ ನೇಣಿಗೆ ಶರಣು
ಮಂಗಳೂರು: ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ಕಚೇರಿ ಸಿಬ್ಬಂದಿಯೋರ್ವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ. 2 ಮಧ್ಯಾಹ್ನ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಪಡೀಲ್ ನಿವಾಸಿ, ಮೂಡ ಕಚೇರಿ ಸಿಬ್ಬಂದಿ ಕೀರ್ತನ್ ಅಳಪೆ (36) ಎಂದು ಗುರುತಿಸಲಾಗಿದೆ
ಕೀರ್ತನ್ಎಂಬವರು ತಮ್ಮ ಕಚೇರಿ ಸ್ಟೋರ್ ರೂಮ್ ನಲ್ಲೇ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ
ಉರ್ವ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.




