September 20, 2024

ಪುತ್ತೂರಿಗೆಶಾಸಕ, ಬಿಜೆಪಿ ಮುಖಂಡ ಬಸನಗೌಡ ಯತ್ನಾಳ್ ಭೇಟಿ: ಮತ್ತೊಮ್ಮೆ ಪಕ್ಷವನ್ನು ಕಟ್ಟುತ್ತೇವೆ, ಬಿರುಕುಂಟು ಮಾಡುವ ಪ್ರಶ್ನೆಯೇ ಇಲ್ಲ, ಎಂದ ಯತ್ನಾಳ್

0

ಪುತ್ತೂರು: ಪಕ್ಷದಿಂದ ದೂರವಾಗಿರುವ ಕಾರ್ಯಕರ್ತರನ್ನು ಪ್ರೀತಿಯಿಂದ ಹತ್ತಿರಕ್ಕೆ ಕರೆದು ಮತ್ತೊಮ್ಮೆ ಪಕ್ಷವನ್ನು ಕಟ್ಟುತ್ತೇವೆ, ಬಿರುಕುಂಟು ಮಾಡುವ ಪ್ರಶ್ನೆಯೇ ಇಲ್ಲ, ಸ್ವಪ್ರತಿಷ್ಠೆ ಯಾರೂ ಮಾಡಬಾರದು, ಹಾಗೆ ಮಾಡಿದರೆ ಪಕ್ಷಕ್ಕೆ, ಹಿಂದುತ್ವಕ್ಕೆ ಅನ್ಯಾಯವಾಗುತ್ತದೆ, ಎಲ್ಲರೂ ಒಂದಾಗಿ ಹೋಗುವ ಹೊಸ ಸೂತ್ರವನ್ನು ನಾವು ಮಾಡುತ್ತೇವೆ ಎಂದು ಬಿಜಾಪುರ ಶಾಸಕ, ಬಿಜೆಪಿ ಮುಖಂಡ ಬಸನಗೌಡ ಯತ್ನಾಳ್ ಹೇಳಿದರು.

ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿರುವ ಕಾರ್ಯಕರ್ತರನ್ನು ಭೇಟಿಯಾದ ಬಳಿಕ ಅವರು ಮಾದ್ಯಮದ ಜೊತೆ ಮಾತನಾಡಿದರು.

ಪೊಲೀಸ್ ಹೊಡೆತಕ್ಕೆ ಒಳಗಾಗಿರುವವರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲಿನ ಒಳಗಿನ ಸತ್ಯ ಗೊತ್ತಾಗಿದೆ. ಇದನ್ನು ಎಲ್ಲಿಗೆ ಮುಟ್ಟಿಸಬೇಕೋ ಅಲ್ಲಿಗೆ ಮುಟ್ಟಿಸುತ್ತೇನೆ. ಕೇಂದ್ರದ ನಾಯಕರಿಗೆ ವಿಷಯ ತಿಳಿಸುತ್ತೇನೆ. ಕೆಲವೇ ದಿನದಲ್ಲಿ ಸರಿಯಾದ ನಿರ್ಣಯ ಪಕ್ಷ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.

ಪೊಲೀಸ್ ಇಲಾಖೆ ಹದ್ದುಬಸ್ತಿನಲ್ಲಿರಬೇಕು. ಇದೇ ರೀತಿಯ ಘಟನೆ ಮುಂದುವರಿದರೆ ನಾವು ಸುಮ್ಮನಿರುವುದಿಲ್ಲ, ರಾಜ್ಯದಲ್ಲಿ ಮುಂದಿನ ದಿನಗಳು ಕಠಿಣವಾಗಲಿದೆ ಎಂದು ಯತ್ನಾಳ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!