ಸುಬ್ರಹ್ಮಣ್ಯ: ಹಾಡಹಗಲೇ ಮನೆಯಂಗಳಕ್ಕೆ ಬಂದ ಕಾಡಾನೆ
ಸುಬ್ರಹ್ಮಣ್ಯ: ಕಾಡಾನೆಯೊಂದು ಹಾಡಹಗಲೇ ಮನೆ ಅಂಗಳಕ್ಕೆ ಹಾಗೂ ತೋಟಕ್ಕೆ ಲಗ್ಗೆ ಇಟ್ಟು ಜನರನ್ನು ಭಯಭೀತಿಗೊಳಿಸಿರುವ ಘಟನೆ ಕಡಬ ತಾಲೂಕಿನಲ್ಲಿ ನಡೆದಿದೆ.
ಸುಬ್ರಹ್ಮಣ್ಯ ಅರಣ್ಯ ವಲಯದ ಕಡ್ಯ ಕೊಣಾಜೆ ಗ್ರಾ.ಪಂ ವ್ಯಾಪ್ತಿಯ ಕಡ್ಯ ಪ್ರದೇಶದಲ್ಲಿ ಕಾಡಾನೆಗಳು ರಾತ್ರಿ ಹಾಗು ಹಗಲಿನಲ್ಲೂ ತೋಟಕ್ಕೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸುಬ್ರಹ್ಮಣ್ಯ ಅರಣ್ಯ ವಲಯದ ಕಡ್ಯ ಕೊಣಾಜೆ ಗ್ರಾ.ಪಂ ವ್ಯಾಪ್ತಿಯ ಕಡ್ಯ ಪ್ರದೇಶದಲ್ಲಿ ಕಾಡಾನೆಗಳು ರಾತ್ರಿ ಹಾಗು ಹಗಲಿನಲ್ಲೂ ತೋಟಕ್ಕೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ.
ರವಿಪ್ರಸಾದ್ ಭಟ್ ಗುಜ್ಜಲ, ನರಸಿಂಹ ಭಟ್ ಪೆರಡೆ, ಮಧುಸೂದನ್ ಭಟ್ ಕಡ್ಯ, ನಾಗರಾಜ್ ಭಟ್ ಕಡ್ಯ, ರವೀಂದ್ರ ಬತ್ತಿಲ್ ಹಾಗೂ ಇತರರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ ನೂರಾರು ಅಡಿಕೆ ಗಿಡ, ಬಾಳೆ, ಇತರೆ ಬೆಳೆಗಳನ್ನು ನಾಶಪಡಿಸಿದೆ.





