ವಿಟ್ಲ: ಏಪ್ರಿಲ್ 30 (ಭಾನುವಾರ)
ಮಜ್ಲಿಸುನ್ನೂರು 2ನೇ ವಾರ್ಷಿಕ:
ಖ್ಯಾತ ವಾಗ್ಮಿ ನವಾಝ್ ಮನ್ನಾನಿ ಪಾನವೂರು ಕೇರಳ ಮುಖ್ಯ ಪ್ರಭಾಷಣ
ವಿಟ್ಲ: ವಿಟ್ಲ ಕೇಂದ್ರ ಜುಮ್ಮಾ ಮಸೀದಿ ಮತ್ತು ಜಮಾಅತ್ ಯೂತ್ ವಿಟ್ಲ ವತಿಯಿಂದ 2ನೇ ವಾರ್ಷಿಕ ಮಜ್ಲಿಸುನ್ನೂರು ಹಾಗೂ ಏಕದಿನ ಮತಪ್ರಭಾಷಣ ಇದೇ 30ರ ಭಾನುವಾರ ಕೇಂದ್ರ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ನವಾಝ್ ಮನ್ನಾನಿ ಪಾನವೂರು ಕೇರಳ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಬಂಬ್ರಾಣ ಉಸ್ತಾದ್, ಕೆ.ಪಿ ಇರ್ಷಾದ್ ಹುಸೈನ್ ದಾರಿಮಿ ಅಲ್ ಅಝ್ ರಿ ಮಿತ್ತಬೈಲು, ಶೇಖ್ ಮೊಹಮ್ಮದ್ ಇರ್ಫಾನಿ, ಮಹಮ್ಮದಾಲಿ ಇರ್ಫಾನಿ ಫೈಝಿ, ಮಹಮ್ಮದ್ ನಸೀಹ್ ದಾರಿಮಿ ವಿಟ್ಲ ಮಜ್ಲಿಸುನ್ನೂರ್ ಗೆ ನೇತೃತ್ವ ನೀಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.