September 20, 2024

ಬಂಟ್ವಾಳ | ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ: ಬಿ.ಸಿ.ರೋಡ್ ನಿವಾಸಿಗಳಿಬ್ಬರ ಬಂಧನ

0

ಕಾಸರಗೋಡು: ಕರ್ನಾಟಕದಿಂದ ಉಪ್ಪಳಕ್ಕೆ ಆಟೋ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ಮಂಜೇಶ್ವರ ಪೊಲೀಸರು ವಶಡಿಸಿಕೊಂಡಿದ್ದು, ಬಂಟ್ವಾಳ ನಿವಾಸಿಗಳಿಬ್ಬರನ್ನು ಬಂಧಿಸಿದ್ದಾರೆ.

ಬಂಟ್ವಾಳ ಬಿ.ಸಿ ರೋಡ್ ನ ಮುಹಮ್ಮದ್ ಇಮ್ತಿಯಾಜ್(38) ಮತ್ತು ಮುಹಮ್ಮದ್ ಜುನೈದ್(29) ಬಂಧಿತರು.

ಇವರಿಂದ ಎರಡೂ ವರೆ ಕಿಲೋ ಗಾಂಜಾ ವನ್ನು ವಶ ಪಡಿಸಿ ಕೊಂಡಿದೆ. ರವಿವಾರ ರಾತ್ರಿ ಮಂಜೇಶ್ವರ ಕೆದಂಬಾಡಿ ಕಡೆಯಿಂದ ಕುಂಜತ್ತೂರಿಗೆ ಒಳದಾರಿಯಾಗಿ ಬರುತ್ತಿದ್ದ ಆಟೋ ರಿಕ್ಷಾ ವನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.

ಉಪ್ಪಳ ಕಡೆಗೆ ಸಾಗಾಟ ಮಾಡುತ್ತಿದ್ದುದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!