ಉದ್ಯಮಿ ಹತ್ಯೆ ಪ್ರಕರಣ: ಆರೋಪಿಗಳ ಬಂಧನ
ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿ ಉದ್ಯಮಿ ಹತ್ಯೆ ಪ್ರಕರಣ ಸಂಬಂಧ ಶಹರ ಠಾಣೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೊಯಿನ್ ಪಟೇಲ್ (24), ಅಬುತಾಲ್ ಮುಲ್ಲ (21) ಬಂಧಿತ ಆರೋಪಿಗಳು. ಈ ಆರೋಪಿಗಳಿಬ್ಬರೂ ಎ2 ಆರೋಪಿ ಶಫತ್ ತ್ರಾಸಗಾರ್ನ ಸ್ನೇಹಿತರು.
ಉದ್ಯಮಿ ರಾಜು ಝಂವರ್ ಕೊಲೆಯಾಗುವ ನಾಲ್ಕು ದಿನಗಳ ಮಧ್ಯೆ ಎ2 ಆರೋಪಿ ಶಫತ್ ತ್ರಾಸಗಾರ್ ಎ1 ಆರೋಪಿ ಡಾ.ಸಚಿನ್ ಶಿರಗಾವಿ ಬಳಿ 50 ಸಾವಿರ ರೂ. ಸುಪಾರಿ ಪಡೆದಿದ್ದರು.
ಈ ಸುಪಾರಿ ಹಣವನ್ನು ಆರೋಪಿಗಳಾದ ಮೊಯಿನ್ ಪಟೇಲ್, ಅಬುತಾಲ್ ಮುಲ್ಲ ಹಾಗೂ ಶಫತ್ ತ್ರಾಸಗಾರ್ ಸಮವಾಗಿ ಹಂಚಿಕೊಂಡಿದ್ದರು.





