ಕಾರಿಗೆ ಬೆಂಕಿ ಹಚ್ಚಿ ಇಬ್ಬರು ಮುಸ್ಲಿಂ ಯುವಕರನ್ನು ಕೊಲೆಗೈದ ಬಜರಂಗದಳದ ಕಾರ್ಯಕರ್ತರು
ಚಂಡೀಗಡ: ಇಬ್ಬರು ಮುಸ್ಲಿಮ್ ಯುವಕರನ್ನು ಗ್ರಾಮದಿಂದ ಅಪಹರಿಸಿದ ಬಜರಂಗದಳದ ಕಾರ್ಯಕರ್ತರು, ಇಬ್ಬರಿಗೂ ಬೆಂಕಿ ಹಚ್ಚಿ ಕೊಂದ ದಾರುಣ ಘಟನೆ ಹರ್ಯಾಣದ ಮನೇಸ್ ಜಿಲ್ಲೆಯಲ್ಲಿ ನಡೆದಿದೆ.
ಇಬ್ಬರ ಮೃತದೇಹ ಅವರು ಪ್ರಯಾಣಿಸುತ್ತಿದ್ದ ಬೊಲೆರೊ ಕಾರಿನಲ್ಲಿ ಪತ್ತೆಯಾಗಿವೆ.
ಜಾನುವಾರು ಹತ್ಯೆ ಮಾಡುವವರು ಎಂದು ಆರೋಪಿಸಿ ಎರಡು ದಿನಗಳ ಹಿಂದೆ ಅವರನ್ನು ಬಜರಂಗದಳದ ಕಾರ್ಯಕರ್ತರು ಗ್ರಾಮದಿಂದ ಅಪಹರಿಸಿದ್ದರು.
ರಾಜಸ್ಥಾನದ ಭರತ್’ಪುರದ ಗೋಪಾಲ್’ಗಢ ಪೊಲೀಸ್ ಠಾಣೆಯಲ್ಲಿ ಬಜರಂಗ ದಳದ ಕಾರ್ಯಕರ್ತರಾದ ಮೋನು ಮನೇಸರ್, ಲೋಕೇಶ್, ರಿಂಕು ಸೈನಿ, ಶ್ರೀಕಾಂತ್ ವಿರುದ್ಧ ಎಫ್’ಐಆರ್ ದಾಖಲಿಸಲಾಗಿದೆ.




