ಗ್ರಾ.ಪಂ ಜನಪ್ರತಿನಿಧಿಗಳ ಗೌರವಧನ ಹೆಚ್ಚಳ ಹಿನ್ನೆಲೆ: ಸರಕಾರದ ಕ್ರಮವನ್ನು ಸ್ವಾಗತಿಸಿದ ಪಂಚಾಯತ್ ರಾಜ್ ಸಂಘಟನೆ
ವಿಟ್ಲ: ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಗಳ ಗೌರವ ಧನ ವನ್ನು ಸರಕಾರ ಕ್ರಮವಾಗಿ,6000,4000 ,2000 ವರೆಗೆ ಹೆಚ್ಚಿಸಿ ಆದೇಶ ಮಾಡಿರುವುದನ್ನು ಪಂಚಾಯತ್ ರಾಜ್ ಸಂಘಟನೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸ್ವಾಗತಿಸುತ್ತದೆ ಮತ್ತು ಈ ಬಗ್ಗೆ ನಮ್ಮೆಲ್ಲರ ಧ್ವನಿಯನ್ನು ವಿಧಾನ ಪರಿಷತ್ ನಲ್ಲಿ ಪರಿಣಾಮ ಕಾರಿಯಾಗಿ ಮಂಡಿಸಿ ಸಚಿವ ರಿಂದ ಭರವಸೆ ಪಡೆದಂತೆ ಇದೀಗ ಆದೇಶ ಬರುವ ಮೂಲಕ ನ್ಯಾಯ ಒದಗಿಸಿದ ಎಂ ಲ್ ಸಿ ಮಂಜುನಾಥ್ ಭಂಡಾರಿ ಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.