ತಲಪಾಡಿ: ಬದ್ರಿಯಾ ಜುಮಾ ಮಸೀದಿಯಲ್ಲಿ ಮೀಲಾದುನ್ನಬಿ ಆಚರಣೆ
ಬಂಟ್ವಾಳ: ಬದ್ರಿಯಾ ಜುಮಾ ಮಸೀದಿ ತಲಪಾಡಿ ಇದರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಜನ್ಮದಿನಾಚರಣೆಯ ಪ್ರಯುಕ್ತ ಹಲವು ಕಾರ್ಯಕ್ರಮಗಳು ನಡೆಯಿತು.


ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಇದಿನಬ್ಬ ಕರ್ನಾಟಕ ಧ್ವಜಾರೋಹಣಗೈದರು.
ಖತೀಬ್ ಹಂಝ ಫೈಝಿ ಅವರು ದುಆ ನೇರವೇರಿಸಿ, ಮೀಲಾದ್ ಸಂದೇಶ ಭಾಷಣ ಮಾಡಿದರು.



ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ನಾಸಿರ್, ಕರೀಂ, ಅಶ್ರಫ್ ಬಿಎಂಟಿ, ಶಾಹುಲ್ ತಲಪಾಡಿ, ಲತೀಫ್ ಬಿಸಿ, ರಫೀಕ್ ಸಪ್ನಾ, ಅನ್ವರ್ ಬಿ.,ಸದ್ದಾಂ, ಅಲ್ತಾಫ್, ಧರ್ಮಗುರುಗಳಾದ ಅಬ್ದುಲ್ ರಝಾಕ್ ದಾರಿಮಿ, ನಿಝಾರ್ ಝೊಹರಿ, ರಝಾಕ್, ಮುಸ್ಲಿಯಾರ್, ಊರಿನ ಹಿರಿಯರಾದ ಅಬೂಬಕರ್ ಹಾಜಿ, ಆದಂ, ಇದಿನಬ್ಬ ಹಾಜರಿದ್ದರು. ಅನ್ವರ್ ಕೆ.ಎಚ್. ಕಾರ್ಯಕ್ರಮ ನಿರೂಪಿಸಿದರು.





