ಬಂಟ್ವಾಳ: ಸಂಭ್ರಮದಲ್ಲಿ ಬಕ್ರೀದ್ ಆಚರಣೆ
ಬಂಟ್ವಾಳ: ತ್ಯಾಗ ಬಲಿದಾನದ ಸಂಕೇತವಾಗಿರುವ ಈದ್ ಉಲ್ ಅದ್ಝಾ ಹಬ್ಬವನ್ನು ಬಿ.ಜೆ.ಎಮ್ ಇರ್ವತ್ತೂರು ನಲ್ಲಿ ಜಮಾಅತ್ ನ ಎಲ್ಲಾ ಬಾಂಧವರು ಒಟ್ಟಿಗೆ ಸೇರಿ ಬಹಳ ಅದ್ದೂರಿಯಾಗಿ ಆಚರಿಸಲಾಯಿತು.
ಮಸೀದಿಯ ಅಧ್ಯಕ್ಷರಾದ ಎಸ್.ಪಿ ರಫೀಕ್ ರವರ ಉಪಸ್ಥಿತಿಯಲ್ಲಿ, ಮಸೀದಿಯ ಖತೀಬರಾದ ಗೌರವಾನ್ವಿತ ಬಹು ಉಮರ್ ಮದನಿ ರವರು
ತ್ಯಾಗ ಮತ್ತು ಬಲಿದಾನದ ಈದ್ ಸಂದೇಶವನ್ನು ನೀಡಿ ,ಈದ್ ನಮಾಝ್ ಗೆ ನೇತೃತ್ವವನ್ನು ನೀಡಿದರು.
ನಂತರ ಜಮಾಅತ್ ನ ಎಲ್ಲಾ ಬಾಂಧವರು ಶುಭಾಶಯ ವಿನಿಮಯ ಮಾಡಿಕೊಂಡು ,ಮನೆ ಮನೆಗೆ ಭೇಟಿಕೊಟ್ಟರು..





