ಭಾರೀ ಮಳೆಗೆ ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿಯ ಕೋಟೆ ಹಳ್ಳ ಸೇತುವೆ ಮುಳುಗಡೆ
ಸುಬ್ರಹ್ಮಣ್ಯ: ನಿರಂತರ ಸುರಿಯುತ್ತಿರುವ ಬಾರೀ ಮಳೆಗೆ ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿಯ ಕೈಕಂಕ ಬಳಿಯ ಕೋಟೆ ಹಳ್ಳ ಸೇತುವೆ ಶನಿವಾರ ರಾತ್ರಿ ಮುಳುಗಡೆಯಾಗಿದೆ.
ಸುಬ್ರಮಣ್ಯ ಸಮೀಪದ ಕೈಕಂಬ ಕಡಬ ರಸ್ತೆಯ ಕೈಕಂಬ ಬಳಿಯ ಕೋಟೆ ಹಳ್ಳ ಎಂಬಲ್ಲಿ ಮುಳುಗು ಸೇತುವೆ ಮಳೆ ನೀರಿನಿಂದ ಮುಳುಗಿ ಸಂಚಾರ ಸ್ಥಗಿತಗೊಂಡಿತು. ರಸ್ತೆಯ ಎರಡು ಬದಿಯ ಇಕ್ಕೇಲಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳುವ ಯಾತ್ರಾರ್ತಿಗಳಿಗೆ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.



