September 20, 2024

ಮಂಗಳೂರು: 179 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

0

ಮಂಗಳೂರು: ರಾಜ್ಯದ 179 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದ್ದು, ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಹಲವರು ವರ್ಗಾವಣೆಗೊಂಡಿದ್ದಾರೆ.

ಬರ್ಕೆ ಠಾಣೆಯಿಂದ ಜ್ಯೋತಿರ್ಲಿಂಗ ಹೊನಕಟ್ಟಿ ಬೆಂಗಳೂರು ಸಿಸಿಬಿಗೆ, ಸಿಸಿಆರ್‌ಬಿಯಲ್ಲಿದ್ದ ಸಿದ್ಧಗೌಡ ಭಜಂತ್ರಿ ಕಂಕನಾಡಿ ನಗರ ಠಾಣೆಗೆ, ಕಂಕನಾಡಿ ನಗರ ಠಾಣೆಯಲ್ಲಿದ್ದ ಅಶೋಕ್ ಪಿ. ಉತ್ತರ ಕನ್ನಡ ಮಹಿಳಾ ಠಾಣೆಗೆ, ಪಾಂಡೇಶ್ವರ ಠಾಣೆಯಲ್ಲಿದ್ದ ಲೋಕೇಶ್ ಎ.ಸಿ. ಮಂಗಳೂರು ಮಹಿಳಾ ಠಾಣೆಗೆ, ರಾಜ್ಯ ಗುಪ್ತವಾರ್ತೆಯಲ್ಲಿದ್ದ ಮಂಜುನಾಥ ಪಾಂಡೇಶ್ವರ ಠಾಣೆಗೆ, ದಕ್ಷಿಣ ಸಂಚಾರ ಠಾಣೆಯಿಂದ ಗುರುದತ್ ಕಾಮತ್ ಸಿಸಿಆರ್‌ಬಿಗೆ, ಬಾಗಲಕೋಟೆ ಬಾದಾಮಿ ವೃತ್ತದಿಂದ ರಮೇಶ್ ಎಚ್.ಹನಾಪುರ ಮಂಗಳೂರು ದಕ್ಷಿಣ ಸಂಚಾರ ಠಾಣೆಗೆ, ಡಿಸಿಆರ್‌ಇಯಿಂದ ವಿನಾಯಕ ಬಿಲ್ಲವ ಎಸಿಬಿಗೆ, ಮಂಗಳೂರು ಮಹಿಳಾ ಠಾಣೆಯಿಂದ ರೇವತಿ ಎನ್. ಸಿಎಸ್‌ಪಿಗೆ ವರ್ಗಾವಣೆಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!