ಪಾಣಕ್ಕಾಡ್ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್ ನಿಧನಕ್ಕೆ ಸಂತಾಪ
ಮಂಗಳೂರು: ಇಂದು ನಿಧನರಾದ ದೇಶದ ಅತೀದೊಡ್ಡ ಧಾರ್ಮಿಕ ಉಲಮಾ ಸಂಘಟನೆಯಾದ ‘ಸಮಸ್ತ’ ದ ಹಿರಿಯ ಉಪಾಧ್ಯಕ್ಷರೂ, ಮುಸ್ಲಿಮರ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಮುಂಚೂಣಿ ನಾಯಕರೂ, ಮಾರ್ಗದರ್ಶಕರೂ, ನೂರಾರು ಮೊಹಲ್ಲಾಗಳ ಖಾಝಿಯೂ ಆದ ಪಾಣಕ್ಕಾಡ್ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್ ಅವರ ನಿಧನಕ್ಕೆ ಕರ್ನಾಟಕ ‘ಸಮಸ್ತ’ ಹನೀಫಿ ಉಲಮಾ ಒಕ್ಕೂಟದ ನಾಯಕರಾದ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ, ಶಂಸುದ್ದೀನ್ ಹನೀಫಿ , ದಾರಿಮೀಸ್ ನಾಯಕರಾದ ಎಸ್.ಬಿ.ದಾರಿಮಿ, ಮೌಲನಾ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ, ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ, ಅಬ್ದುಲ್ ಕರೀಂ ದಾರಿಮಿ, ‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ,ದ.ಕ.ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ, ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಪಿ.ಅಹ್ಮದ್ ಹಾಜಿ ಆಕರ್ಷನ್, ದ.ಕ.ಜಿಲ್ಲಾ ಎಸ್.ವೈ.ಎಸ್ .ನಾಯಕರಾದ ಕೆ.ಎಲ್.ಉಮರ್ ದಾರಿಮಿ, ಹಕೀಂ ಪರ್ತಿಪ್ಪಾಡಿ, ಅಬೂ ಸಿರಾಜ್, ಹಾಜಿ ಅಬ್ದುಲ್ ರಹಿಮಾನ್ ಅಝಾದ್, ಪುತ್ತೂರು ರೇಂಜ್ ಕೋಶಾಧಿಕಾರಿ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ, ದಾರುಲ್ ಹಸನಿಯಾದ ಅನ್ವರ್ ಸ್ವಾದಿಕ್ ಮುಸ್ಲಿಯಾರ್, ಅಲ್ ಅಹ್ಸನ್ ವ್ಯವಸ್ಥಾಪಕ ರೆಂಜಾಡಿ ಅಬ್ದುಲ್ ಲತೀಫ್ ದಾರಿಮಿ, ಮೊದಲಾದವರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.


