February 1, 2026

ಟ್ರಕ್ ಅಪಘಾತ: ಪ್ರತಿಭಟನಾನಿರತ ಮೂರು ರೈತರು ಮೃತ್ಯು:
ಲಖೀಂಪುರ್ ಖೇರಿಯಲ್ಲಿ  ಘಟನೆ ಮಾಸುವ ಮೊದಲೇ  ಮತ್ತೊಂದು ಅವಘಡ

0
image_editor_output_image-106095241-1635397310852.jpg

ನವದೆಹಲಿ: ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿದ ಘಟನೆ ಮಾಸುವ ಮೊದಲೇ ಅಂಥದ್ದೇ ಮತ್ತೊಂದು ಘಟನೆ ಗುರುವಾರ ಹರಿಯಾಣ-ದೆಹಲಿ ಗಡಿಯಲ್ಲಿ ನಡೆದಿದೆ.

ಕೇಂದ್ರ ಸರ್ಕಾರದ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಈ ಅಪಘಾತ ನಡೆದಿದೆ. ಪಂಜಾಬ್‌ನ ಮಾನ್ಸಾದಿಂದ ಬಂದ ಮೂವರು ಮಹಿಳಾ ಪ್ರತಿಭಟನಾಕಾರರು ಗುರುವಾರ, ಅಕ್ಟೋಬರ್ 28 ರಂದು ಹರ್ಯಾಣದ ಜಜ್ಜರ್ ಜಿಲ್ಲೆಯ ಬಹದ್ದೂರ್‌ಘರ್ ಬಳಿ ವೇಗವಾಗಿ ಬಂದ ಟ್ರಕ್‌ ಹರಿದ ಪರಿಣಾಮ ಸಾವನ್ನಪ್ಪಿದ್ದಾರೆ

ಆಟೋರಿಕ್ಷಾಕ್ಕಾಗಿ ಕಾದು ಡಿವೈಡರ್ ಮೇಲೆ ಕುಳಿತ ಮಹಿಳೆಯರ ಮೇಲೆ ಟ್ರಕ್ ಹರಿದುಕೊಂಡು ಹೋಗಿದೆ. ಟ್ರಕ್ ಅಪಘಾತ ಸಂಭವಿಸಿದ ಸ್ಥಳದಲ್ಲೇ ಇಬ್ಬರು ಮಹಿಳೆರು ಪ್ರಾಣ ಬಿಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡ ಒಬ್ಬ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆ ಮಹಿಳೆಯೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!