December 15, 2025

ಪುತ್ತೂರು: ಮದರಸ ವಿದ್ಯಾರ್ಥಿ ಕೆರೆಗೆ ಬಿದ್ದು ಗಂಭೀರ

0
unnamed-1.jpg

ಪುತ್ತೂರು: ಮಾಡನ್ನೂರಿನಲ್ಲಿ ಮದರಸ ವಿದ್ಯಾರ್ಥಿಯೋರ್ವ ಕೆಸರು ತುಂಬಿದ ಕೆರೆಯ ನೀರಿಗೆ ಬಿದ್ದು ಅಸ್ವಸ್ಥಗೊಂಡಿದ್ದು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾದ ಘಟನೆ ವರದಿಯಾಗಿದೆ.

ಕುರಿಯದ ರಝಾಕ್ ಎಂಬವರ ಮಗ, ಮದ್ರಸಾ ವಿದ್ಯಾರ್ಥಿಯಾಗಿರುವ ಹಸೈನಾರ್ (16)ಎಂಬವರು ನೀರಿಗೆ ಬಿದ್ದವರು. ವಿದ್ಯಾರ್ಥಿಗಳು ಕೊಳದ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಹಸೈನಾರ್ ಅವರು ಆಯತಪ್ಪಿ ಕೆಸರು ತುಂಬಿದ ಕೆರೆಯ ನೀರಿಗೆ ಬಿದ್ದಿದ್ದರು.

ಸುಮಾರು ಹೊತ್ತಿನವರೆಗೆ ಹೊರಬರಲಾರದೆ ಕೆಸರು ನೀರಿನಲ್ಲಿ ಬಾಕಿಯಾಗಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!