ಸುಳ್ಯ: ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಗ್ರಾಮಸ್ಥರಿಂದ ಬ್ಯಾನರ್ ಅಳವಡಿಸಿ ಮನವಿ
ಸುಳ್ಯ: ಸುಳ್ಯ ತಾಲೂಕು ದುಗ್ಗಲಡ್ಕ- ನೀರಬಿದಿರೆ- ಕೊಡಿಯಾಲಬೈಲ್ ಸಂಪರ್ಕ ರಸ್ತೆ ಹೊಂಡ ಗುಂಡಿಗಳಿಂದ ತುಂಬಿದ್ದು ಕಳೆದ ಹಲವಾರು ವರ್ಷಗಳಿಂದ ಈ ಭಾಗದ ಜನರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ರಸ್ತೆಯ ಅಭಿವೃದ್ಧಿಗಾಗಿ ಹಲವಾರು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳ ಆಶ್ವಾಸನೆ,ಭರವಸೆಯಿಂದ ಬೇಸತ್ತಿರುವ ಆ ಭಾಗದ ನಾಗರಿಕರು ಫೆ 20 ರಂದು ದುಗ್ಗಲಡ್ಕದಲ್ಲಿ ಬ್ಯಾನರ್ ಅಳವಡಿಸಿ ವಿಶೇಷ ಪ್ರತಿಭಟನೆ ನಡೆಸಿದರು.
ರಸ್ತೆ ಅಭಿವೃದ್ಧಿಗಾಗಿ ದೇವರ ಮೊರೆ ಹೋಗಿರುವ ಗ್ರಾಮಸ್ಥರು ದುಗ್ಗಲಡ್ಕ ದುಗ್ಗಲಾಯ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ,ಜನಪ್ರತಿನಿಧಿಗಳೇ,ಇನ್ನಾದರೂ ಈ ರಸ್ತೆ ಅಭಿವೃದ್ಧಿಗೆ ಸೂಕ್ತ ಅನುದಾನ ಒದಗಿಸಿ ಎಂದು ಬರೆದ ಬ್ಯಾನರ್ ಅಳವಡಿಸಿ ತಮ್ಮ ಬೇಡಿಕೆಯನ್ನು ವ್ಯಕ್ತಪಡಿಸಿದ್ದಾರೆ.