ಹಾಸನ: ಮಾರನಹಳ್ಳಿ ನೂರುಲ್ ಇರ್ಷಾದ್ ಜುಮ್ಮಾ ಮಸೀದಿಯಲ್ಲಿ ಅದ್ದೂರಿಯಾಗಿ ಈದ್ ಮಿಲಾದ್
ಹಾಸನ: ಜಿಲ್ಲೆ ಸಕಲೇಶಪುರ ತಾಲ್ಲೂಕು ಮಾರನಹಳ್ಳಿ ನೂರುಲ್ ಇರ್ಷಾದ್ ಜುಮ್ಮಾ ಮಸೀದಿಯಲ್ಲಿ ಅದ್ದೂರಿಯಾಗಿ ಈದ್ ಮಿಲಾದ್ ಆಚರಿಸಲಾಯಿತು.


ಸಯ್ಯದ್ ಮಾರನಹಳ್ಳಿ ತಂಗಳ್ರವರು ಧ್ವಜ ರೋಹಣ ಮಾಡುವ ಮೂಲಕ ಚಾಲನೆ ನೀಡಲಾಯಿತು. ಇದೆ ಸಂದರ್ಭದಲ್ಲಿ ಮಕ್ಕಳ ಕಾರ್ಯಕ್ರಮದ ಜೊತೆಯಲ್ಲಿ ಈವರ್ಷದ ಮಾರನಹಳ್ಳಿ ಸರಕಾರಿ ಶಾಲೆಯಲ್ಲಿ ಓದಿದ S S l C ಯಲ್ಲಿ ಮೊದಲ ಸ್ಥಾನ ಹಾಗೂ 2ನೇ ಸ್ಥಾನ ಪಡೆದ ವಿದ್ಯಾರ್ಥಿನಿರಿಗೆ ಬಹುಮಾನ ಕೊಡಲಾಯಿತು.
ಇದೆ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷರು ಮಾತನಾಡಿ ಪ್ರವಾದಿ ನೇ ಸಹ ಲ್ಲ್ಯಾವರ 1501ನೇ ಜನುಮ ದಿನಾಚರಣೆಯನ್ನು ಆಚರಿಸುತ್ತಿರುವ ನಾವು ಈ ಸಂದರ್ಭದಲ್ಲಿ ಹೆತ್ತ ತಂದೆ ತಾಯಿಯನ್ನು ಗೌರವಿಸಿ ಕುಟುಂಬ ಬೆಳೆಸಿದಾಗ ಮಾತ್ರ ನಿಜವಾದ ಆಚರಣೆಗೆ ಗೌರವ ಸಿಗಲು ಸಾಧ್ಯತೆ ಹೆಚ್ಚು ಇದೆ ಸಂದರ್ಭದಲ್ಲಿ ಜಮಾಹತ್ ಬಾಂಧವರು ಹಾಗೂ ಗ್ರಾಮಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿ ಗೊಳಿಸಿದರು .
ನೂರುಲ್ ಇರ್ಷಾದ್ ಜಮಾಹತ್ ಕಮಿಟಿ ಮಾರನಹಳ್ಳಿ





