August 29, 2026

ಸಚಿವ ಯು.ಟಿ.ಖಾದರ್ ರವರಿಗೆ ವಿಟ್ಲದಲ್ಲಿ ಸ್ವಾಗತ.

0
IMG-20260822-WA0222

ವಿಟ್ಲ:  ರಾಜ್ಯ ಘನ ಸರ್ಕಾರದ ಆರೋಗ್ಯ ,ಕುಟುಂಬ ಕಲ್ಯಾಣ ,ಹಜ್ ,ವಕ್ಫ್  ಅಲ್ಪಸಂಖ್ಯಾತ ಕಲ್ಯಾಣ   ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ರವರು ಮಾಣಿಲ ಶ್ರೀ ಧಾಮದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದಾಗ ವಿಟ್ಲ  ಜಂಕ್ಷನ್ ನಲ್ಲಿ ಭವ್ಯ ಸ್ವಾಗತ ನೀಡಲಾಯಿತು.


    ಕಾಂಗ್ರೆಸ್ ನ ನಾಯಕರು  ಹಾಗೂ ಸಚಿವರ ಅಭಿಮಾನಿಗಳು  ಹೂ ಹಾರ ಹಾಕಿ ಸ್ವಾಗತಿಸಿದರು.


    ಈ ಸಂದರ್ಭ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಮಹಮ್ಮದ್ ಇಕ್ಬಾಲ್ ಹಾನೆಸ್ಟ್,ವಿ.ಕೆ.ಎಂ‌,ಅಶ್ರಫ್, ಸಾಮಾಜಿಕ ಕಾರ್ಯಕರ್ತ ಸುದರ್ಶನ ಪಡಿಯಾರ್ ,ಉಧ್ಯಮಿ ಮನ್ಸೂರ್ ಹಾನೆಸ್ಟ್,,ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ರಶೀದ್ ವಿ.ಎ.  ಕಾಂಗ್ರೆಸ್ ಮುಖಂಡ ದಿನಕರ ಆಳ್ವ,, ವಿಟ್ಲ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ವಿ.ಕೆ.ಎಂ. ಹಂಝ ,ಹನೀಫ್ ಹಳೆಮನೆ, ಅನಿವಾಸಿ ಉಧ್ಯಮಿ ವಿ.ಕೆ.ಎಂ. ಸಾಲಿ, ಜಯರಾಮ  ಕಿಶೋರ್  ರೈ  ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!