August 20, 2026

ಪುತ್ತೂರು: ಉಕ್ಕಿ ಹರಿಯುವ ಹೊಳೆಯಲ್ಲಿ ಈಜಿ ವಿದ್ಯುತ್ ತಂತಿ ಮರುಜೋಡಣೆ : ಪವರ್‌ಮ್ಯಾನ್ ಸಾಹಸಮಯ ಕರ್ತವ್ಯಕ್ಕೆ ಶ್ಲಾಘನೆ

0
image_editor_output_image1669466965-1787201596187

ಪುತ್ತೂರು: ಉಕ್ಕಿ ಹರಿಯುತ್ತಿದ್ದ ಹೊಳೆಗೆ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಈಜಿ ಸಾಗಿ ಮರುಜೋಡಿಸುವ ಮೂಲಕ ಮೆಸ್ಕಾಂ ಲೈನ್ ಮ್ಯಾನ್ ಒಬ್ಬರು ಸಾಹಸಮಯ ಕರ್ತವ್ಯ ಪ್ರದರ್ಶಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಧೂಮಡ್ಕ ಎಂಬಲ್ಲಿ ಈ ಘಟನೆ ನಡೆದಿದೆ.

ಧೂಮಡ್ಕ ಪ್ರದೇಶದಲ್ಲಿ ಹಾದುಹೋಗುವ ಸೀರೆ ಹೊಳೆಗೆ ವಿದ್ಯುತ್ ತಂತಿ ಕಡಿದು ಬಿದ್ದಿತ್ತು. ಇದರಿಂದ ಸುತ್ತಮುತ್ತಲ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಬೆಟ್ಟಂಪಾಡಿ ಮೆಸ್ಕಾಂ ಉಪವಿಭಾಗದ ಲೈನ್ ಮ್ಯಾನ್ ಬಂದೇ ನವಾಜ್, ರಿಸ್ಕ್ ತೆಗೆದುಕೊಂಡು ಭೋರ್ಗರೆಯುತ್ತಿದ್ದ ಸೀರೆ ನದಿಯಲ್ಲಿ ಈಜಿ ಸಾಗಿ ವಿದ್ಯುತ್ ತಂತಿಯನ್ನು ಮರುಜೋಡಿಸಿದ್ದಾರೆ.
ಲೈನ್ ಮ್ಯಾನ್ ಬಂದೇ ನವಾಜ್ ಅವರ ಈ ಸಾಹಸಮಯ ಕರ್ತವ್ಯ ಪ್ರಜ್ಞೆಯ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಹಾಗೂ ಮೆಸ್ಕಾಂ ಹಿರಿಯ ಅಧಿಕಾರಿಗಳಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!