ಸುಳ್ಯ: ಅಸೌಖ್ಯದಿಂದ ಯುವತಿ ನಿಧನ
ಸುಳ್ಯದ ಹೆಸರಾಂತ ಇಎನ್ ಟಿ ವೈದ್ಯ ಡಾ. ರವಿಶಂಕರ್ ರವರ ಹಿರಿಯ ಪುತ್ರಿ ಕು. ಅಭಿಜ್ಞಾ ಭಟ್ ಅಲ್ಪಕಾಲದ ಅಸೌಖ್ಯದಿಂದ ಜೂ. 10 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 19 ವರ್ಷ ವಯಸ್ಸಾಗಿತ್ತು.
ಅಭಿಜ್ಞಾ ಭಟ್ ಇತ್ತೀಚಿಗೆ ಪಿಯುಸಿ ವಿದ್ಯಾಭ್ಯಾಸ ಮುಗಿದಿದ್ದು 596 ಅಂಕಗಳೊಂದಿಗೆ ರಾಜ್ಯದಲ್ಲಿ ರ್ಯಾಂಕ್ ಪಡೆದಿದ್ದರು. ಮೃತರು ತಂದೆ ಡಾ. ರವಿಶಂಕರ, ತಾಯಿ ಶ್ರೀಮತಿ ಅನುಪಮ, ಸಹೋದರಿ ಕು. ಅನುಜ್ಞ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.




