ಮಂಗಳೂರು | ಮೀನುಗಾರಿಕಾ ದಕ್ಕೆಯಲ್ಲಿ ಮುರಿದು ಬಿದ್ದ ಬೀದಿ ದೀಪದ ಕಂಬ: ಕಾರ್ಮಿಕ ಮೃತ್ಯು
ಮಂಗಳೂರು: ನಗರದ ಮೀನುಗಾರಿಕ ದಕ್ಕೆಯಲ್ಲಿ ಬೀದಿ ದೀಪದ ಕಂಬವೊಂದು ಮುರಿದು ಮೈ ಮೇಲೆ ಬಿದ್ದ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
ತಮಿಳುನಾಡು ಮೂಲದ ಮುರುಗನ್ (35) ಮೃತಪಟ್ಟವರು. ಮೀನು ಕಾರ್ಮಿಕನಾಗಿ ದುಡಿಯುತ್ತಿದ್ದ ಅವರು, ಮೀನು ಹೊತ್ತು ಬಂದು ಕುಳಿತ್ತಿದ್ದ ವೇಳೆಯಲ್ಲೇ ಕಂಬ ಮುರಿದು ಬಿದ್ದಿದ್ದು, ಇದರಿಂದ ಮುಗುರುನ್ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆ ವೇಳೆಗಾಗಲೇ ಮೃತಪಟ್ಟಿದ್ದಾರೆ




