ವಿಟ್ಲ: ಬ್ರಹ್ಮಶ್ರೀ ವಿವಿದ್ದೊದ್ದೇಶ ಸಹಕಾರಿ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಚುನಾವಣೆ: ಅಧ್ಯಕ್ಷರಾಗಿ ಸಂಜೀವ ಪೂಜಾರಿ ನಿಡ್ಯ, ಉಪಾಧ್ಯಕ್ಷರಾಗಿ ಬಾಬು ಕೆ.ವಿ ಆಯ್ಕೆ
ವಿಟ್ಲ ಬ್ರಹ್ಮಶ್ರೀ ವಿವಿದ್ದೊದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹಾಗೂ ನಿರ್ದೇಶಕರ ಆಯ್ಕೆ ಪ್ರಕ್ರಿಯೆಯು ಸಂಘದ ಕಚೇರಿಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಸಂಜೀವ ಪೂಜಾರಿ ನಿಡ್ಯ
ಉಪಾಧ್ಯಕ್ಷರಾಗಿ ಬಾಬು ಕೊಪ್ಪಳ ಇವರು ಆಯ್ಕೆಯಾದರು. ನಿರ್ದೇಶಕರುಗಳಾಗಿ ಡಾ ಗೀತಪ್ರಕಾಶ್ ಎ , ರಾಘವ ಪೂಜಾರಿ , ಜಗದೀಶ್ ಪಾಣೆಮಜಲು, ಅಭಿಜಿತ್ ಜೆ, ಸಂಜೀವ ಪೂಜಾರಿ ಎಂ, ರವಿ ಬಿ ಕೆ, ಮಾಧವ ಪೂಜಾರಿ , ಶ್ರೀಧರ ಬಿ, ಪ್ರಕಾಶ್ ಕೆ, ಶ್ರೀಮತಿ ವನಿತಾ ಚಂದ್ರಹಾಸ ಮತ್ತು ಶ್ರೀಮತಿ ಶ್ವೇತಾ ಪದ್ಮನಾಭ ಇವರು ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಶ್ರೀ ವಿಲಾಸ್ ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿ ಮಂಗಳೂರು ದ ಕ ಜಿಲ್ಲೆ ರವರು ನಡೆಸಿಕೊಟ್ಟರು. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಯಂತ ಪಿ ಉಪಸ್ಥಿತರಿದ್ದರು.




