ಬಂಟ್ವಾಳ: ಚರಂಡಿಯ ಮೇಲೆ ಹತ್ತಿದ ಕಾರು
ಬಂಟ್ವಾಳ: ಚರಂಡಿಯ ಮೇಲೆ ಕಾರು ಹತ್ತಿದ ಘಟನೆ ಬುಧವಾರ(ಅ.22) ರಾತ್ರಿ ವೇಳೆ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುವಿನಲ್ಲಿ ನಡೆದಿದೆ.
ಅತಿಯಾದ ಮಳೆಗೆ ಚಾಲಕನ ನಿಯಂತ್ರಣ ಕಳೆದುಕೊಂಡು ಈ ಅವಘಡ ಸಂಭವಿಸಿದೆ. ಪುತ್ತೂರು ನಿವಾಸಿ, ಇರ್ಶಾದ್ ಎಂಬವರು ಪತ್ನಿ ಜೊತೆ ಮಂಗಳೂರಿಗೆ ತೆರಳುತ್ತಿದ್ದ ಸಂದರ್ಭ ಘಟನೆ ನಡೆದಿದೆ.
ಘಟನೆಯಿಂದ ಯಾವುದೇ ಅಪಾಯವಾಗಿಲ್ಲ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.




