ಧರ್ಮಸ್ಥಳ ಪ್ರಕರಣ: ಬೊಳಿಯಾರು ಸಮೀಪದ ಅರಣ್ಯದಲ್ಲಿ ಪತ್ತೆಯಾಗದ ಕಳೇಬರ
ಧರ್ಮಸ್ಥಳ: ಇಂದು ನಡೆದ ಅಗೆಯುವ ಕಾರ್ಯ, ದೂರುದಾರ ತೋರಿಸಿದ ಬೊಳಿಯಾರು ಸಮೀಪದ ಅರಣ್ಯದಲ್ಲಿ ಎಸ್.ಐ.ಟಿ ತಂಡ ಶುಕ್ರವಾರ ಕಾರ್ಯಾಚರಣೆ ನಡೆಸಿದರೂ, ಸ್ಥಳದಲ್ಲಿ ಯಾವುದೇ ಕಳೆಬರಗಳು ಪತ್ತೆಯಾಗಿಲ್ಲ.
ಇಂದು ಮಧ್ಯಾಹ್ನದ ವೇಳೆ ಎಸ್.ಐ.ಟಿ ತಂಡ ಬೊಳಿಯಾರು ಅರಣ್ಯಕ್ಕೆ ಅಗಮಿಸಿ ಕಾರ್ಯಾಚರಣೆ ಆರಂಭಿಸಿದ್ದರು.
ಹಿಟಾಚಿಯನ್ನು ಬಳಸಿಕೊಂಡು ಕಾರ್ಮಿಕರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯಿತು. ಆದರೆ ಅಲ್ಲಿ ಅಗೆಯುವ ಕಾರ್ಯವನ್ನು ನಡೆಸಿದ್ದು ಅಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.




