ಮಂಗಳೂರು: ಯುವ ವಕೀಲೆ ರಾಜಶ್ರೀ ಪೂಜಾರಿ ನಿಧನ
ಮಂಗಳೂರು: ಬಹುಮುಖ ಪ್ರತಿಭೆ, ವಕೀಲೆ ರಾಜಶ್ರೀಜೆ. ಪೂಜಾರಿ ವಿಧಿವಶರಾಗಿದ್ದಾರೆ.
ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜಶ್ರೀ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಬರಹಗಾರ್ತಿ, ಸಾಹಿತಿ, ನಿರೂಪಕಿ, ವಕೀಲೆ ಹೀಗೆ ನಾನಾ ಕ್ಷೇತ್ರಗಳಲ್ಲಿ, ವಿವಿಧ ಸಂಘ ಸಂಸ್ಥೆಗಳಲ್ಲಿ ರಾಜಶ್ರೀ ಸಕ್ರಿಯವಾಗಿದ್ದರು. ತನ್ನ ಸೌಮ್ಯ ಸ್ವಭಾವದಿಂದ ಬಹಳಷ್ಟು ಮಂದಿಗೆ ಆಪ್ತರಾಗಿದ್ದರು. ಅವರ ಪ್ರತಿಭೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ.




