ಸುಳ್ಯ: ಜಿಲ್ಲಾ ನ್ಯಾಯಾಧೀಶರಾಗಿ ಜ್ಯೋತ್ಸ್ನಾ ದೋಳ ಪ್ರಮಾಣವಚನ ಸ್ವೀಕಾರ
ಸುಳ್ಯ: ಜಿಲ್ಲಾ ಸತ್ರ ನ್ಯಾಯಾಧೀಶೆಯಾಗಿ ಇತ್ತೀಚೆಗೆ ನೇಮಕಗೊಂಡ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ದೋಳ ಶಂಕರನಾರಾಯಣ ಮತ್ತು ವಿಜಯಲಕ್ಷ್ಮಿ ದಂಪತಿಗಳ ಪುತ್ರಿ ಶ್ರೀಮತಿ ಜ್ಯೋತ್ಸ್ನಾ ದೋಳರವರು ಇದೀಗ ಜಿಲ್ಲಾ ನ್ಯಾಯಾಧೀಶೆಯಾಗಿ ನಿನ್ನೆ (ಡಿ.20) ಬೆಂಗಳೂರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಜ್ಯೋತ್ಸ್ನಾ ರವರ ತಂದೆ ಮತ್ತು ಪುತ್ರಿ ಅಸೀಮಾ ದೋಳ ಉಪಸ್ಥಿತರಿದ್ದರು.




