March 20, 2025

ಬಂಟ್ವಾಳ: ಯುವಕ ನೇಣು ಬಿಗಿದು ಆತ್ಮಹತ್ಯೆ

0

ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳ ಪೋಟೋಗೆ ಲೈಕ್ ಮಾಡಿದ್ದನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಪ್ರಶ್ನಿಸಿ ಗಲಾಟೆ ಮಾಡಿದ್ದಕ್ಕೆ ಮನನೊಂದು ಯುವಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳ ತಾಲೂಕು ಕುಕ್ಕಿಪಾಡಿ ಗ್ರಾಮದ ಎಲ್ಪೇಲು ಎಂಬಲ್ಲಿ ನಡೆದಿದೆ.

ಮೃತರನ್ನು ಚೇತನ್‌ (25) ಎಂದು ಗುರುತಿಸಲಾಗಿದ್ದು, ಇವರು ದೈವದ ಪಾತ್ರಿಯಾಗಿ ಸೇವೆ ಮಾಡಿಕೊಂಡಿದ್ದರು. ಚೇತನ್ ಅವರಿಗೆ ಮಂಗಳೂರಿನ ಯುವತಿಯ ಜೊತೆ 8 ತಿಂಗಳ ಹಿಂದೆ ಮದುವೆ ನಿಶ್ಚಿತಾರ್ಥ ಆಗಿತ್ತು.

ಜನವರಿ 21ರಂದು ಬೆಳಗ್ಗೆ ಚೇತನ್ ಅವರ ತಾಯಿ ಹೊರಗೆ ಹೋಗಿದ್ದರು. ಈ ವೇಳೆ ಚೇತನ್ ಮನೆಗೆ ನಿಶ್ಚಿತಾರ್ಥವಾಗಿದ್ದ ಯುವತಿ ಬಂದಿದ್ದಾಳೆ. ಸ್ವಲ್ಪ ಸಮಯದ ನಂತರ ಆಕೆ ಚೇತನ್ ತಾಯಿ ಅವರಿಗೆ ಕರೆ ಮಾಡಿ ನಿಮ್ಮ ಮಗ ಮಲಗಿದ್ದಲ್ಲಿ ಎದ್ದೇಳುತ್ತಿಲ್ಲ ಕೂಡಲೇ ಮನೆ ಬನ್ನಿ ಎಂದು ತಿಳಿಸಿದ್ದಾಳೆ.

 

 

Leave a Reply

Your email address will not be published. Required fields are marked *

error: Content is protected !!