March 15, 2025

ಬೆಳ್ತಂಗಡಿ: ಜ.12 ರಂದು ಹಸನಿಯ್ಯಾ ಚಾರಿಟೇಬಲ್ ಎಜುಕೇಶನಲ್ ಸೆಂಟರ್‌ನಲ್ಲಿ ಅಜ್ಮೀರ್ ಆಂಡ್ ನೇರ್ಚೆ ಆಧ್ಯಾತ್ಮಿಕ ಮಹಾ ಸಂಗಮ

0

ಬೆಳ್ತಂಗಡಿ: ಕೊಕ್ಕಡ ಪಟ್ಟೂರೂ, ಅಡ್ಡ್ಯೆ ಯಲ್ಲಿ ನಡೆಯುತ್ತಿರುವ ಸಂಸ್ಥೆಯಾದ ಹಸನಿಯ್ಯಾ ಚಾರಿಟೇಬಲ್ ಎಜುಕೇಶನಲ್ ಸೆಂಟರ್‌ನಲ್ಲಿ ವರ್ಷಕ್ಕೊಮ್ಮೆ ನಡೆಯುವ ಅಜ್ಮೀರ್ ಆಂಡ್ ನೇರ್ಚೆ ಆಧ್ಯಾತ್ಮಿಕ ಮಹಾ ಸಂಗಮ ಇದೆ ಬರುವ ಜನವರಿ ತಿಂಗಳ 12 ಆದಿತ್ಯವಾರದಂದು ನಡೆಯಲಿದೆ.

ಸಂಸ್ಥೆಯ ಮುಖ್ಯಸ್ಥರಾದ ಬಹು: ಶಾಫಿ ಸಖಾಫಿ ಅಲ್ ಖಾಮಿಲ್ ಉಸ್ತಾದರು ಸಮಾರಂಭವನ್ನು ಉದ್ಘಾಟಿಸಿ ಪ್ರಭಾಷಣ ಮಾಡಲಿದ್ದಾರೆ. ಅಸ್ಸಯ್ಯಿದ್ ಶಿಹಾಬುದ್ದೀನ್ ಅಹ್ದಲ್ ಅಲ್ ಹಾಶೀಮಿ ತಂಙಳ್ ಮುತ್ತನೂರ್ ಕೇರಳ ಮುಖ್ಯ ಪ್ರಬಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಸ್ಸಯ್ಯಿದ್ ಇಸ್ಮಾಯಿಲ್ ಅಲ್-ಹಾದಿ ತಂಙಳ್ ಉಜಿರೆ, ಅಲ್ -ಹಾಜ್ ಉಸ್ತಾದ್ ಯೂಸುಫ್ ಸಖಾಫಿ ಆದೂರು, ಆಸೀಫ್ ಮುಈನಿ ಉಪ್ಪಿನಂಗಡಿ, ನೌಷಾದ್ ಸಖಾಫಿ ಕೊಕ್ಕಡ
ಮೊದಲಾದ ಹಲವಾರು ಗಣ್ಯರು ಭಾಗವಹಿಸುವವರು ಎಂದು ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!