March 19, 2026

ಕಾಸರಗೋಡು: ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ

0
image_editor_output_image-1199489844-1735556428053.jpg

ಕಾಸರಗೋಡು: ಸೇತುವೆಯಿಂದ ನದಿಗೆ ಹಾರಿ ನಾಪತ್ತೆಯಾಗಿದ್ದ ಮೀಪುಗಿರಿ ನಿವಾಸಿಯ ಮೃತದೇಹ ಉಪ್ಪಳ ಮೂಸೋಡಿ ಕಡಲ ಕಿನಾರೆಯಲ್ಲಿ ರವಿವಾರ ರಾತ್ರಿ ಪತ್ತೆಯಾಗಿದೆ.

ಮೀಪುಗುರಿ ಶೆಟ್ಟಿ ಗದ್ದೆಯ ನ ಎಂ.ಗಿರೀಶ್(49) ಮೃತ ವ್ಯಕ್ತಿ. ಶುಕ್ರವಾರದಂದು ಚಂದ್ರಗಿರಿ ಸೇತುವೆಯ ಬಳಿ ಗಿರೀಶ್ ಅವರು ಬೈಕ್, ಚಪ್ಪಲಿ, ಪರ್ಸ್ ಬಿಟ್ಟು ನದಿಗೆ ಹಾರಿದ್ದರು.

ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಸೇರಿ ಹುಡುಕಾಡಿದರೂ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಉಪ್ಪಳ ಕಡಲ ಕಿನಾರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ

Leave a Reply

Your email address will not be published. Required fields are marked *

error: Content is protected !!