March 16, 2025

ಫೆಂಗಲ್ ಚಂಡಮಾರುತ: ಮಂಗಳೂರಿನ ಬಂದರಿನಲ್ಲಿದ್ದ ಹಲವು ಬೋಟ್ ಗಳು ನೀರುಪಾಲು

0

ಮಂಗಳೂರು : ತಮಿಳುನಾಡಿನಲ್ಲಿ ಉಂಟಾದ ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯಕ್ಕೂ ತಟ್ಟಿದ್ದು, ಇದೀಗ ಮಂಗಳೂರಿನ ಬಂದರಿನಲ್ಲಿ ಇದ್ದಂತಹ ಸುಮಾರು ಹತ್ತಕ್ಕೂ ಹೆಚ್ಚು ಮೀನುಗಾರಿಕಾ ಬೋಟ್ ಗಳು ಸಮುದ್ರದಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

ಮಂಗಳೂರಿನ ಬಂದರಿನಲ್ಲಿ ಮೀನುಗಳಿಗಾಗಿ ಬಲೆ ಬೀಸುವ ಹಲವು ಬೋಟ್ ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಅಲ್ಲದೆ ಇನ್ನೊಂದು ಕಡೆ ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಸಮೀಪದ ಆದ್ಯಪಾಡಿಯಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಭೂ ಕುಸಿತ ಹಿನ್ನೆಲೆಯಲ್ಲಿ ಬಜಪೆ ಮತ್ತು ಆದ್ಯಪಾಡಿಯ ರಸ್ತೆಯ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿದ್ದು, ಮಾನಾ ಶಾಲಿಯಾನ್ ಎಂಬುವರಿಗೆ ಸೇರಿದ ಮನೆಗೆ ಭೂಕುಸಿತದ ಹಾನಿ ಉಂಟಾಗಿದೆ.

 

 

Leave a Reply

Your email address will not be published. Required fields are marked *

error: Content is protected !!