ಕಾರ್ಕಳ: ವಿಷ ಸೇವಿಸಿ ಯುವಕ ಆತ್ಮಹತ್ಯೆ

ಕಾರ್ಕಳ : ಯುವಕನೋರ್ವ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜು. 27 ರಂದು ರೆಂಜಾಳದಲ್ಲಿ ಸಂಭವಿಸಿದೆ. ಗಣೇಶ್ (26) ಆತ್ಮಹತ್ಯೆಗೆ ಶರಣಾದವರು.
ಯಾವುದೋ ಕಾರಣಕ್ಕೆ ಮನನೊಂದು ಶನಿವಾರ ಮಧ್ಯಾಹ್ನ 3.30 ರಿಂದ ರಾತ್ರಿ 9.30 ರ ನಡುವಿನ ಅವಧಿಯಲ್ಲಿ ರೆಂಜಾಳ ಗ್ರಾಮದ ಸರಕಾರಿ ಶಾಲೆಯ ಬಳಿ ಇರುವ ಕಲ್ಕದಬೆಟ್ಟು ಹಾಡಿಯಲ್ಲಿ ವಿಷ ಪದಾರ್ಥ ಸೇವಿಸಿದ್ದು, ಬಳಿಕ ಚಿಕಿತ್ಸೆಗಾಗಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅದಾಗಲೇ ಗಣೇಶ್ ಮೃತಪಟ್ಟಿರುತ್ತಾರೆ.
ಮರದ ಕೆಲಸ ಮಾಡಿಕೊಂಡಿದ್ದ ಗಣೇಶ್ ಅವರಿಗೆ ಎರಡು ತಿಂಗಳ ಹಿಂದೆ ಜಾಂಡೀಸ್ ಬಾಧಿಸಿತ್ತು ಎಂದು ತಿಳಿದುಬಂದಿದೆ. ಮೃತರು ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.