ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರಇದರ ವತಿಯಿಂದ ಸ್ವಲಾತ್ ವಾರ್ಷಿಕ
ವಿಟ್ಲ ದಾರುನ್ನಜಾತ್ ಎಜುಕೇಶನ್ ಸೆಂಟರ್ ಟಿಪ್ಪು ನಗರ ಸಂಸ್ಥೆಯ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಶೈಖುನಾ ವಾಲೆಮುಂಡೋವು ಉಸ್ತಾದರ ಅಧ್ಯಕ್ಷತೆಯಲ್ಲಿ ಸ್ವಲಾತ್ ವಾರ್ಷಿಕ ಹಾಗೂ ಕೂರ ತಂಙಳ್ ಅನುಸ್ಮರಣೆ ಮತ್ತು ಸಂಸ್ಥೆಯ ಶಿಲ್ಪಿ ಮರ್ ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಅವರ ಐದನೇ ಆಂಡ್ ನೇರ್ಚೆಯ ದಿನ ಸೆಪ್ಟೆಂಬರ್ 7 ತಾರೀಕಿಗೆ ನಡೆಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ವಾಲೆಮಂಡೋವ್ ಉಸ್ತಾದ್ ಘೋಷಣೆ ಮಾಡಿದರು.
ಕಾರ್ಯಕ್ರಮವನ್ನು ಅಸ್ಸಯ್ಯದ್ ಶಮೀಮ್ ತಂಙಳ್ ಉದ್ಘಾಟಿಸಿದರು ಬಳಿಕ ಅಸಯ್ಯದ್ ಸರ್ಫುದ್ದೀನ್ ತಂಙಳ್ ಅನುಸ್ಮರಣೆ ಪ್ರಭಾಷಣ ಹಾಗೂ ದುವಾ ನೇತೃತ್ವ ನೀಡಿದರು.ಪ್ರಸ್ತುತ ಈ ಕಾರ್ಯಕ್ರಮದಲ್ಲಿ SMA ವಿಟ್ಲ ರೀಜಿನಲ್ ಅಧ್ಯಕ್ಷರಾದ ಅಬ್ದುಲ್ ಹಕೀಂ ಶಿಹಾಬುದ್ದೀನ್ ಸಖಾಫಿ KMJ ಕಾರ್ಯದರ್ಶಿ ಇಬ್ರಾಹಿಂ ಮುಸ್ಲಿಯಾರ್ ಟಿಪ್ಪು ನಗರ ಅಬ್ಬಾಸ್ ಮದನಿ ಕೊಡಂಗಾಯಿ ಹಾಫಿಲ್ ಶರೀಫ್ ಮುಸ್ಲಿಯರ್ ಸಂಸ್ಥೆಯ ಕೋಶಾಧಿಕಾರಿ ಡಾ ಹಸೈನರ್ SMA ವಿಟ್ಲ ಝೋನ್ ಕೋಶಾಧಿಕಾರಿ ಉಮರ್ ವಿಟ್ಲ
ಯೂನುಸ್ ಸಅದಿ ಟಿಪ್ಪು ನಗರ ಸಿನಾನ್ ಸಖಾಫಿ ಟಿಪ್ಪು ನಗರ ಹಕೀಮ್ ಮುಸ್ಲಿಯರ್ ಟಿಪ್ಪುನಗರ ಮುಸ್ಲಿಂ ಜಮಾಅತ್ ನಾಯಕರಾದ ಮೋನುಚ್ಚ ಟಿಪ್ಪುನಗರ ಯೂಸುಫ್ ನಡ್ಯಾಳ ಮುಸ್ತಫ ಕುಂಡಡ್ಕ ಅಬ್ಬಾಸ್ ಟಿಪ್ಪು ನಗರ ಮುಂತಾದವರು ಉಪಸ್ಥಿತರಿದ್ದರು ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಸ್ವಾಗತಿಸಿದರು ಕೊನೆಗೆ
ಶಿಹಾಬುದ್ದೀನ್ ಸಖಾಫಿ ಎಲ್ಲರಿಗೂ ಧನ್ಯವಾದ ಹೇಳಿದರು.