ಕಾಸರಗೋಡು: ಸ್ನೇಹಿತನಿಗೆ ಮೆಸೇಜ್ ಕಳುಹಿಸಿ ವ್ಯಕ್ತಿ ಆತ್ಮಹತ್ಯೆ
ಕಾಸರಗೋಡು: ಚಂದ್ರಗಿರಿ ನದಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ.
ಆತ್ಮಹತ್ಯೆ ಮೊದಲು ಸ್ನೇಹಿತನಿಗೆ ಮೊಬೈಲ್ ಸಂದೇಶದ ಮೂಲಕ ಮಾಹಿತಿ ನೀಡಿದ್ದ ಎನ್ನಲಾಗಿದೆ.
ರಾವೇಣೇಶ್ವರ ಮೊಕೋಡ್ ನಿವಾಸಿ ಅಜೇಶ್ ಪಾಲಕ್ಕಾಲ್(35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತದೇಹ ಇಂದು ಬೆಳಗ್ಗೆ ಚೆಂಬರಿಕ ಕಲ್ಲುವಲಪ್ಪಿನ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.
ಮೂಕೋಡ್ ಕಲಾರಿಕ್ಕಾಲ್ ನಲ್ಲಿ ಪಾಲಕ್ಕಾಲ್ ಟ್ರೇಡರ್ಸ್ ಸಂಸ್ಥೆ ನಡೆಸುತ್ತಿದ್ದ ಇವರು ಗುರುವಾರ ಸಂಜೆ ಮೂರು ಗಂಟೆ ಸುಮಾರಿಗೆ ಚಂದ್ರಗಿರಿ ಹೊಳೆಯ ಸಮೀಪ ಸ್ಕೂಟರ್ ಹಾಗೂ ಮೊಬೈಲ್ ಫೋನ್ ಇಟ್ಟು ಬಳಿಕ ಹೊಳೆಗೆ ಹಾರಿದ್ದರೆನ್ನಲಾಗಿದೆ.
ಇದಕ್ಕೂ ಮೊದಲು ಅವರು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತನ್ನ ಸ್ನೇಹಿತನ ಮೊಬೈಲ್ ಗೆ ಮೆಸೇಜ್ ಮಾಡಿದ್ದರು.