September 20, 2024

ಮಾಣಿ:ಚತುಷ್ಪಥ ಕಾಮಗಾರಿ ಹಿನ್ನೆಲೆ: ಅಪಾಯದಲ್ಲಿ ಮನೆಗಳು-ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ

0

ವಿಟ್ಲ : ಇಲ್ಲಿನ ಹಳೀರ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಅವೈಜ್ಞಾನಿಕ ರೀತಿಯಲ್ಲಿ ಮಣ್ಣು ತೆಗೆದು ತಡೆಗೋಡೆ ನಿರ್ಮಿಸದ ಕಾರಣದಿಂದ ಹೆದ್ದಾರಿ ಬದಿ ಎತ್ತರದಲ್ಲಿದ್ದ ಮನೆಗಳಿಗೆ ಅಪಾಯದಲ್ಲಿದ್ದ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಪರಿಶೀಲಿಸಿದರು.


ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಹಳೀರ ಎಂಬಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಖತೀಜಮ್ಮ, ಆಯಿಷಾ ಅವರ ಮನೆ ಅಪಾಯದಲ್ಲಿದ್ದು, ಪಳಿಕೆ ಹಮೀದ್ ಅವರ ಮನೆಗೆ ಕಾಮಗಾರಿಯ ವೇಳೆ ಚರಂಡಿ ನಿರ್ಮಾಣ ಮಾಡದ ಪರಿಣಾಮ ನೀರು ಮನೆಯೊಳಗಡೆ ಹರಿದು ತೊಂದರೆಯಾಗಿತ್ತು. ಖತೀಜಮ್ಮ ಅವರ ಕುಟುಂಬವು ಸುಮಾರು ನಲ್ವತ್ತು ವರ್ಷಗಳಿಂದ ವಾಸವಿದ್ದು ಎಂಟು ವರ್ಷಗಳ ಹಿಂದೆ ಹಳೆ ಮನೆ ರಿಪೇರಿ ಮಾಡಿಸಿ ಕಾಂಕ್ರೀಟ್ ಟೆರೇಸ್ ಮಾಡಿದ್ದರು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಿರ್ಮಾಣಕ್ಕೆ ಗುತ್ತಿಗೆದಾರರು ಸ್ವಾಧೀನ ಪಡಿಸಿಕೊಂಡ ಜಾಗಕ್ಕಿಂತ ಹೆಚ್ಚು ಜಾಗದಿಂದ ಮಣ್ಣು ತೆಗೆದು ಮನೆ ಬೀಳುವಂತೆ ಮಾಡಿದ್ದು ತಡೆಗೋಡೆ ಕೂಡಾ ನಿರ್ಮಿಸದೆ ಸತಾಯಿಸುತ್ತಿರುವ ಬಗ್ಗೆ ಮನೆಯವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ಅರ್ಚನ ಭಟ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಾಣಿಗ್ರಾಮ ಪಂಚಾಯತ್ ಮಾಣಿ ಸದಸ್ಯದ ಬಾಲಕೃಷ್ಣ ಆಳ್ವ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಪಂಚಾಯತ್ ಅಧಿಕಾರಿಗಳು, ಸ್ಥಳೀಯರಾದ ಗಣೇಶ್ ರೈ ಮಾಣಿ, ಉಮೇಶ್ ಶೆಟ್ಟಿ ಮಾಣಿ, ಸಾಮಾಜಿಕ ಮುಂದಾಳು ಅಝೀಝ್ ಮಾಣಿ, ಹವ್ಯಾಸಿ ಪತ್ರಕರ್ತ ಸಲೀಂ ಮಾಣಿ,ಬಶೀರ್ ಮಾಣಿ,ಅಶ್ರಫ್,ಮಜೀದ್,ಕರೀಂ,ಅಮೀರ್,ಇಬ್ರಾಹಿಂ, ಸಿದ್ದೀಕ್ ಹಳೀರ, ಮುಹಮ್ಮದ್ ಹನೀಫ್ ಪಂತಡ್ಕ, ಮೊದಲಾದವರು ಉಪಸ್ಥಿತರಿದ್ದರು.
,,,,,,,,,,

Leave a Reply

Your email address will not be published. Required fields are marked *

error: Content is protected !!