ಕಲಬುರಗಿ: ಕಾಂಗ್ರೆಸ್ ಅಭ್ಯರ್ಥಿ ಜಯಬೇರಿ
ಕಲಬುರಗಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ತವರು ಕಲಬುರಗಿಯಲ್ಲಿ ಮತ್ತೆ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದೆ. ಡಾ. ಖರ್ಗೆ ಅವರ ಅಳಿಯ ಡಾ.ರಾಧಾಕೃಷ್ಣ ದೊಡ್ಡಮನಿ ಬಿಜೆಪಿಯ ಡಾ. ಉಮೇಶ ಜಾಧವ್ ಅವರನ್ನು ಸೋಲಿಸಿ ಸಂಸತ್ ಗೆ ಪ್ರವೇಶಿಸಿದ್ದಾರೆ.
ಕಳೆದ 2009ರ ಚುನಾವಣೆಯಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು 95 ಸಾವಿರ ಮತಗಳ ಅಂತರದಿಂದ ಸೋಲಿಸಿ ಸಂಸತ್ ಗೆ ಪ್ರವೇಶಿಸಿದ್ದ ಬಿಜೆಪಿಯ ಡಾ. ಉಮೇಶ ಜಾಧವ್ ಈಗ ಖರ್ಗೆ ಅವರ ಅಳಿಯ ರಾಧಾಕೃಷ್ಣ ಎದುರು ಪರಾಭವಗೊಂಡಿದ್ದಾರೆ.




