ಬೆಳ್ಳೂರು: ಸಂಘಪರಿವಾರದ ಕಾರ್ಯಕರ್ತನ ಮೇಲೆ ಹಲ್ಲೆ: ಎಫ್ಐಆರ್ ದಾಖಲು
ಮಂಡ್ಯ: ಬೆಳ್ಳೂರು ಪಟ್ಟಣದಲ್ಲಿ ಸಂಘಪರಿವಾರದ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಸೋಮವಾರ ರಾತ್ರಿ ಬೆಳ್ಳೂರಿನ ಅಭಿಲಾಷ್ ಎಂಬಾತನ ಮೇಲೆ ಇನ್ನೊಂದು ಧರ್ಮದ ಯುವಕರು ಹಲ್ಲೆ ನಡೆಸಿದ್ದರು. ಚೇರ್, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಅಭಿಲಾಷ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಅಲ್ಲದೇ ಹಲ್ಲೆ ನಡೆಸಿದವರ ಮೇಲೆ ಅಭಿಲಾಷ್ ತಂದೆ ರಾಮು ದೂರು ನೀಡಿದ್ದಾರೆ.




