ಪುತ್ತೂರು: ಗಾಳಿ ಸಹಿತ ಭಾರೀ ಮಳೆ, ಹಲವೆಡೆ ಹಾನಿ
ಪುತ್ತೂರು: ಪುತ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದಿದ್ದು, ಗಾಳಿ ಜೊತೆ ಸುರಿದ ಮಳೆಗೆ ಹಲವೆಡೆ ಹಾನಿಯಾಗಿದೆ.
ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದು, ನಿನ್ನೆ ಸಂಜೆ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಳೆ ಬಂದಿದೆ. ಇಂದು ಕೂಡ ಪುತ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದಿದ್ದು, ಬಪ್ಪಳಿಗೆ ಎಂಬಲ್ಲಿ ಗಾಳಿಗೆ ಮನೆಗೆ ಹಾಕಿದ ತಗಡು ಶೀಟು ಹಾರಿ ಹೋಗಿದೆ.
ಉರ್ಲಾಂಡಿಯಲ್ಲೂ ಮನೆಗೆ ಭಾಗಶ ಹಾನಿಯಾಗಿದೆ. ಇನ್ನು ಹಾನಿ ಪ್ರದೇಶಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದ್ದು ಹಾನಿಗೊಳಗಾದ ಮನೆಗಳಿಗೆ ತಕ್ಷಣ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.




