ವಿಟ್ಲ: ಯುವಕನ ಮೇಲೆ ಮಾರಕಾಯುಧಗಳಿಂದ ದಾಳಿ: ಕಾರಿನಲ್ಲಿ ಬಂದ ಐವರ ತಂಡದಿಂದ ಕೃತ್ಯ
ವಿಟ್ಲ: ಅಡ್ಯನಡ್ಕ ಸಮೀಪದ ಕುದ್ದುಪದವು ಎದುರುಕಜೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಕಾಯುಧದಿಂದ ದಾಳಿ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿರುವಾತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎದುರುಕಜೆ ನಿವಾಸಿ ಅಲಿ ಎಂಬವರ ಮೇಲೆ ದಾಳಿ ನಡೆದು ಗಾಯಗೊಂಡಿದ್ದಾರೆ. ಮಧ್ಯಾಹ್ನದ ಸಮಯ ಕಾರಿನಲ್ಲಿ ಆಗಮಿಸಿದ ಐದು ತಂಡದಿಂದ ಮರಕಾಯುಧದಿಂದ ದಾಳಿ ನಡೆದಿದ್ದು, ತೀವ್ರ ತರಹದ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದಾತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.




