ಅತಿಥಿ ಶಿಕ್ಷಕನ ಭೀಕರ ಹತ್ಯೆ
ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಮೋದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಮರಿಯಪ್ಪ (47) ಎಂಬಾತ ಭೀಕರವಾಗಿ ಕೊಲೆಯಾಗಿ ಹೋಗಿದ್ದಾನೆ.
ತಲೆಭಾಗಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮರಿಯಪ್ಪ ಮೂಲತಃ ಪಂಡಿತನಾಗಿ ಕೆಲಸ ಮಾಡುತ್ತಿದ್ದು, ಕಳೆದ ಆರು ತಿಂಗಳಿನಿಂದ ಮೋದೂರು ಗ್ರಾಮದ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನಂತೆ. ಇದರ ಜೊತೆಗೆ ಮನೆಯಲ್ಲಿ ಚೌಡಿ ದೇವಿಗೆ ಪೂಜೆ ಮಾಡಿ ಯಂತ್ರ ಮಂತ್ರ ಎಂದು ಶಾಸ್ತ್ರ ಹೇಳುತ್ತಿದ್ದ ಎನ್ನಲಾಗಿದೆ.




