ಬೆಳ್ತಂಗಡಿ : ಕೀಳು ಶಬ್ದ ಬಳಕೆ: ಶಾಸಕ ಹರೀಶ್ ಪೂಂಜರಿಗೆ ವಕೀಲರ ಸಂಘದಿಂದ ಖಂಡನಾ ಪತ್ರ
ಬೆಳ್ತಂಗಡಿ: ಕಳೆದ ಕೆಲವು ದಿನಗಳ ಹಿಂದೆ ಶಾಸಕ ಹರೀಶ್ ಪೂಂಜ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುವಾಗ ವಕೀಲರಿಗೆ ಕೀಳು ಮಟ್ಟದ ಶಬ್ದ ಬಳಕೆ ಮಾಡಿರುವ ಬಗ್ಗೆ ವಕೀಲರ ಸಂಘಕ್ಕೆ ದೂರು ನೀಡಲಾಗಿತ್ತು.
ಇದಕ್ಕೆ ಸ್ಪಂದಿಸಿ ಬಾರ್ ಅಸೋಸಿಯೇಷನ್ ಹರೀಶ್ ಪೂಂಜರಿಗೆ ಖಂಡನಾ ಪತ್ರ ನೀಡಿದೆ.
ಶಾಸಕ ಹರೀಶ್ ಪೂಂಜರ ಮಾತಿನಿಂದ ಸಂಘಕ್ಕೆ ಬೇಸರ ಉಂಟಾಗಿರುವ ಬಗ್ಗೆ ಉಲ್ಲೇಖಿಸಿರುವ ವಕೀಲರ ಸಂಘ ಕೀಳುಮಟ್ಟದ ಪದ ಬಳಕೆ ಮಾಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.


