March 15, 2026

ಉಳ್ಳಾಲ: ಅಕ್ರಮ ಮರಳು ಸಾಗಾಟ:
ಲಾರಿ ಸಹಿತ ಚಾಲಕ ವಶಕ್ಕೆ

0
image_editor_output_image556542640-1695996947381.jpg


ಉಳ್ಳಾಲ: ಅಕ್ರಮ ಮರಳು ಸಾಗಾಟದ ಲಾರಿಯನ್ನು ವಶಕ್ಕೆ ಪಡೆದುಕೊಂಡಿರುವ ಉಳ್ಳಾಲ ಪೊಲೀಸರು, ಚಾಲಕನನ್ನು ಬಂಧಿಸಿದ್ದಾರೆ.

ಕುತ್ತಾರು ಸಮೀಪ ಲಾರಿಯನ್ನು ತಡೆಹಿಡಿದು , ಮಲಾರ್ ಅಕ್ಷರನಗರ ನಿವಾಸಿ ಖಲಂದರ್ ಶಾಫಿ (20) ವಶಕ್ಕೆ ಪಡೆದುಕೊಂಡವರು. ಆರೋಪಿತ ಕಲ್ಲಾಪು ನದಿ ತೀರದಿಂದ ಕೊಣಾಜೆ ಕಡೆಗೆ ಈಚರ್ ಟಿಪ್ಪರ್ ಲಾರಿ ಮೂಲಕ ಮರಳು ಸಾಗಾಟ ನಡೆಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗ ಕುತ್ತಾರು ಸಮೀಪ ತಡೆ ಹಿಡಿದ ಪೊಲೀಸರು ಲಾರಿ, ಮರಳು ಸಮೇತ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳ್ಳಾಲ ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು

Leave a Reply

Your email address will not be published. Required fields are marked *

error: Content is protected !!