March 15, 2026

ಮಂಗಳೂರು: ಸಾರ್ವಜನಿಕ ಶಾಂತಿಗೆ ಭಂಗ ಯತ್ನ: ನೀರುಮಾರ್ಗದಲ್ಲಿ ನಾಲ್ವರು ಪೊಲೀಸರ ವಶಕ್ಕೆ

0
1693582901109.jpg


 
ಮಂಗಳೂರು: ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗವುಂಟು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ನೀರುಮಾರ್ಗದಲ್ಲಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಮೊಹಮ್ಮದ್‌ ಶರೀಫ್‌, ಅಬ್ದುಲ್‌ ರಹಿಮಾನ್‌, ಚೇತನ್‌ ಹಾಗೂ ವಿಕ್ರಮ್‌ ಬಂಧಿತ ಆರೋಪಿಗಳು. ನೀರುಮಾರ್ಗ ಜಂಕ್ಷನ್‌ನ ಅಂಚೆ ಕಚೇರಿಯ ಸನಿಹರುವ ಉಡುಪ ಕ್ಲಿನಿಕ್‌ನ ಮುಂಭಾಗದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿಗಳು ಪರಸ್ಪರ ಕೈಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ.

ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!