ವಿಟ್ಲ: ಬೆಳಿಗ್ಗೆ ಅದ್ಧೂರಿಯಾಗಿ ಶುಭಾರಂಭಗೊಂಡ ಬಿಗ್ಬಜಾರ್: ಸಂಜೆ ವೇಳೆ ಬೀಗ ಜಡಿದ ಅಧಿಕಾರಿಗಳು: ಕಾರಣವೇನು ಗೊತ್ತಾ?
ವಿಟ್ಲ: ವಿಟ್ಲದ ಅಡ್ಡದ ಬೀದಿಯಲ್ಲಿರುವ ಜೆ.ಎಮ್.ಜೆ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಗೊಂಡಿದ್ದ ಮಾಧವ ರತ್ನ ಬಿಗ್ಬಜಾರ್ ಗೆ ಕೆಲವೇ ಗಂಟೆಯಲ್ಲಿ ಬೀಗ ಜಡಿದಿದ್ದಾರೆ.
ವಿಟ್ಲದ ಅಡ್ಡದಬೀದಿಯಲ್ಲಿ ಶುಕ್ರವಾರ ಬೆಳಿಗ್ಗೆ ಅದ್ಧೂರಿಯಾಗಿ ಬಿಗ್ಬಜಾರ್ ಶುಭಾರಂಭಗೊಂಡಿತ್ತು. ಸಂಜೆ ಇಲ್ಲಿಗೆ ಆಗಮಿಸಿದ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಗೋಪಾಲ ನಾಯ್ಕ ಮತ್ತು ಸಿಬ್ಬಂದಿ ಪರಿಶೀಲಿಸಿದ್ದಾರೆ. ಇಲ್ಲಿ ವ್ಯಾಪಾರ ನಡೆಸಲು ಪ.ಪಂ ನಿಂದ ಯಾವುದೇ ಅನುಮತಿ ಪಡೆಯದಿರುವುದು ಗಮನಕ್ಕೆ ಬಂದಿದೆ. ಬಳಿಕ ಅಧಿಕಾರಿಗಳು ಅಂಗಡಿ ಬೀಗ ಜಡಿದಿದ್ದಾರೆ. ಬಿಗ್ಬಜಾರ್ನ ಪ್ರಚಾರದ ಬ್ಯಾನರ್ ಅನ್ನು ವಿದ್ಯುತ್ ಟ್ರಾನ್ಸ್ ಫರ್ಮರ್ ಗೆ ಅಳವಡಿಸಿದ್ದು, ಇದು ಕಾನೂನು ಬಾಹಿರವಾಗಿದ್ದು, ಅದನ್ನು ಕೂಡಾ ಅಧಿಕಾರಿಗಳು ತೆರವುಗೊಳಿಸಿದ್ದಾರೆ.