ಮಂಗಳೂರು ಉತ್ತರ ಕ್ಷೇತ್ರದಿಂದ ಇನಾಯಲ್ ಅಲಿಗೆ ಕಾಂಗ್ರೆಸ್ ಟಿಕೆಟ್: ಎಪ್ರಿಲ್ 9ರಂದು ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಘೋಷಣೆ ಸಾಧ್ಯತೆ
ಸುರತ್ಕಲ್: ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ಗೆ ಕಗ್ಗಂಟಾಗಿದ್ದ ಮಂಗಳೂರು ಉತ್ತರ ವಿಧಾಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅಂತಿಮಗೊಂಡಿದ್ದು, ಘೋಷಣೆಯಷ್ಟೇ ಬಾಕಿ ಇದೆ.
ಈಬಾರಿಯ ವಿಧಾನ ಸಭೆ ಚುನಾವಣೆಯ ಟಿಕೆಟ್ಗಾಗಿ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದೀನ್ ಬಾವಾ ಹಲವು ರೀತಿಯ ಲಾಭಿಗಳನ್ನು ನಡೆಸಿದ್ದರು ಎನ್ನಲಾಗಿದೆ. ಆದರೆ, ಹೈಕಮಾಂಡ್ ಅವರ ಯಾವುದೇ ಲಾಭಿಗಳಿಗೆ ಮಣಿಯದೇ, ಕೆಪಿಸಿಸಿ ಪ್ರಧಾನ ಕಾರ್ಯದ್ರಶಿಯಾಗಿರುವ ಇನಾಯತ್ ಅಲಿ ಅವರಿಗೆ ಟಿಕೆಟ್ ಅಂತಿಮಗೊಳಿಸಿದೆ ಎಂದು ಕಾಂಗ್ರೆಸ್ನ ಪ್ರಬಲ ಮೂಲವೊಂದು ಮಾಹಿತಿ ನೀಡಿದೆ.
ಈಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉತ್ತಮ ಹುದ್ದೆ ನೀಡುವ ಭರವಸೆಯನ್ನು ಮಾಜೀ ಶಾಸಕ ಮೊಯ್ದೀನ್ ಬಾವಾ ಅವರಿಗೆ ಹೈಕಮಾಂಡ್ ನೀಡಿದೆ ಎಂದು ತಿಳಿದು ಬಂದಿದೆ.
ಎ.9ರಂದು ಕಾಂಗ್ರೆಸ್ನ ಮೂರನೇ ಪಟ್ಟಿ ಬಿಡುಗಡೆಗೊಳ್ಳಲಿದ್ದು, ಈ ಪಟ್ಟಿಯಲ್ಲಿ ಇನಾಯತ್ ಅಲಿ ಅವರ ಹೆಸರು ಇದೆ ಎಂದು ಕೈ ಮೂಲಗಳು ಮಾಹಿತಿ ನೀಡಿದೆ.