September 20, 2024

ಕಾರ್ಕಳ: ಕ್ಯಾಂಡಲ್ ಫ್ಯಾಕ್ಟರಿ ಅಗ್ನಿ ಅವಘಡ: ಸೊತ್ತುಗಳು ಸಂಪೂರ್ಣ ಭಸ್ಮ

0

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಚಚ್೯ ಪರಿಸರದಲ್ಲಿ ಕ್ಯಾಂಡಲ್ ಫ್ಯಾಕ್ಟರಿಯೊಂದು ಅಗ್ನಿ ಅಹುತಿಗೊಳಗಾಗಿ ಸಂಪೂರ್ಣವಾಗಿ ಭಸ್ಮಗೊಂಡಿದೆ. ಮಾಚ್೯ 22ರ ಮಧ್ಯಾಹ್ನ ವೇಳೆಗೆ‌ ಈ ದುರ್ಘಟನೆ ಸಂಭವಿದೆ.

ನಿಟ್ಟೆ ಗ್ರಾಮ ಪಂಚಾಯತ್ ನ ಅತ್ತೂರು ಚರ್ಚ್ ಬಳಿ ಕ್ಯಾಂಡಲ್ ತಯಾರಿಕಾ ಕೇಂದ್ರ ದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು,

ಸುಮಾರು ಸತತ ಎರಡು ಅಗ್ನಿಶಾಮಕ ವಾಹನಗಳಿಂದ ಸುಮಾರು 03 ಗಂಟೆ ಕಾರ್ಯಾಚರಣೆ ಮಾಡಿ ಬೆಂಕಿಯನ್ನು ನಂದಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಿಬ್ಬಂದಿಗಳಾದ ಉದಯ್ ಕುಮಾರ್ ಹೆಗ್ಡೆ ,ಅಚ್ಚುತ್ ಕರ್ಕೇರಾ, ಜಯ ಮೂಲ್ಯ , ಮಹ್ಮ್ಮದ್ ರಫೀಕ್ , ಕೇಶವ್ , ಸುಜಯ್ , ಉಮೇಶ್,ಬಸವರಾಜ್,ರವಿಚಂದ್ರ,ವಿನಾಯಕ್ ,ಸಂಜಯ್ ಮತ್ತು ಮುಜಮಿಲ್ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

error: Content is protected !!