June 10, 2026

ಕಾರು, ಕಂಟೈನರ್‌ ನಡುವೆ ಭೀಕರ ಅಪಘಾತ: ಪ್ರಾಧ್ಯಾಪಕ ಮೃತ್ಯು

0
image_editor_output_image-1082464030-1679114804020.jpg

ಶಿರ್ವ: ಕಾರು ಮತ್ತು ಕಂಟೈನರ್‌ ನಡುವೆ ಹೊನ್ನಾವರದಲ್ಲಿ ನಡೆದ ಭೀಕರ ಅಪಘಾತದಲ್ಲಿ ಬಂಟಕಲ್ಲು ಶ್ರಿ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಮೃತಪಟ್ಟ ಘಟನೆ ಶುಕ್ರವಾರ (ಮಾ.17) ಮಧ್ಯಾಹ್ನ ನಡೆದಿದೆ.

ಹಿರಿಯ ಸಹಾಯಕ ಪ್ರಾಧ್ಯಾಪಕ ಅನಂತೇಶ ರಾವ್‌ (40) ಮೃತಪಟ್ಟ ವ್ಯಕ್ತಿ.

ಅನಂತೇಶ ರಾವ್‌ ಉಡುಪಿಯಿಂದ ಸೋದೆ ಮೂಲ ಮಠಕ್ಕೆ ತೆರಳುತ್ತಿದ್ದ ವೇಳೆ ಅವರ ಕಾರು ಹೊನ್ನಾವರದ ಬಳಿ ಕಂಟೈನರ್‌ಗೆ ಢಿಕ್ಕಿ ಹೊಡೆದಿದ್ದು, ಈ ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!