ಕಡಬ| ಚಿರತೆ ಹಾವಳಿ: ರಬ್ಬರ್ ಮರದ ಮೇಲೆ ಮೆಕೆಯ ಅರ್ಧ ತಿಂದ ಕಳೆಬರಹ ಪತ್ತೆ
ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಕಾಡಾನೆಗಳ ಸಂಕಷ್ಟದ ಜೊತೆಗೆ ಚಿರತೆ ಹಾವಳಿಯ ಪ್ರಕರಣ ವರದಿಯಾಗಿದೆ.
ಇಲ್ಲಿನ ಸ್ಥಳೀಯ ನಿವಾಸಿಗಳು ಜೀವ ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿನ ಬೆತ್ತೋಡಿ ಎಂಬಲ್ಲಿ ರಬ್ಬರ್ ಮರದ ಮೇಲೆ ಮೆಕೆಯ ಅರ್ಧ ತಿಂದ ಕಳೆಬರಹ ಪತ್ತೆಯಾಗಿದ್ದು ಚಿರತೆ ಹಾವಳಿ ಇದೆ ಎಂಬುವುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿ ನಿಂತಿದೆ.
ಇನ್ನು ಇತ್ತೀಚೆಗಷ್ಟೆ ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಕು ನಾಯಿಯನ್ನು ಚಿರತೆ ಹಿಡಿದ ಪ್ರಕರಣ ವರದಿಯಾಗಿತ್ತು.




