ಕಾಸರಗೋಡು: ಹವಾಲ ಹಣ ಪ್ರಕರಣ: ತಲೆಮರೆಸಿಕೊಂಡಿದ್ದ ಮಂಜೇಶ್ವರ ನಿವಾಸಿ ದೆಹಲಿಯಲ್ಲಿ ಅರೆಸ್ಟ್
ಕಾಸರಗೋಡು: ದೆಹಲಿಯಲ್ಲಿನ ಹವಾಲ ಹಣಕ್ಕೆ ಸಂಬಂಧ ಪಟ್ಟಂತೆ ಮಂಜೇಶ್ವರ ನಿವಾಸಿಯನ್ನು ಎನ್ಐಎ ಬಂಧಿಸಿದೆ.
ಮಂಜೇಶ್ವರ ಕುಂಜತ್ತೂರಿನ ಮುಹಮ್ಮದ್ ಅಬಿದ್ (42) ಬಂಧಿತ.
ತಿಂಗಳುಗಳ ಹಿಂದೆ ದೆಹಲಿಯಲ್ಲಿ ದಾಖಲಾದ ಹವಾಲ ಹಣ ವಹಿವಾಟಿಗೆ ಸಂಬಂಧ ಪಟ್ಟಂತೆ ಈತನನ್ನು ಬಂಧಿಸಲಾಗಿದೆ.
ಪ್ರಕರಣದ ಬಳಿಕ ಆಬಿದ್ ತಲೆಮರೆಸಿಕೊಂಡಿದ್ದು, ಈತ ಮಂಜೇಶ್ವರದಲ್ಲಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಲಾಗಿದೆ.




