December 16, 2025

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಬೆದರಿಕೆ ಪ್ರಕರಣ: ಆರೋಪಿಗೆ ಒಂದೇ ದಿನದಲ್ಲಿ ಜಾಮೀನು ಮಂಜೂರು

0
image_editor_output_image1588470873-1665801866832

ಬಂಟ್ವಾಳ: ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಬೆನ್ನಟ್ಟಿ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ರಿಯಾಝ್ ಗೆ ಜಾಮೀನು ಮಂಜೂರು ಆಗಿದೆ.

ಪ್ರಕರಣದ ಆರೋಪಿ ಪಳ್ನೀರ್ ನಿವಾಸಿ ರಿಯಾಝ್‍ಗೆ ಬಂಟ್ವಾಳ ಪ್ರಥಮ ದರ್ಜೆ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ತನಿಖೆ ಮುಂದುವರಿದಿದ್ದು ಆರೋಪಿ ರಿಯಾಝ್ ನಿವಾಸದಲ್ಲಿ ಶೋಧ ನಡೆಸಲಾಗಿದೆ. ಆರೋಪಿಯಿಂದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಘಟನೆಯ ವೇಳೆ ಆರೋಪಿ ಬಳಸಿದ ಸ್ಕಾರ್ಪಿಯೊ ಕಾರಿನಿಂದ ಒಂದು ‘ಸ್ಪ್ಯಾನರ್ ರಾಡ್ ಫ್ರೆಂಚ್’ (ವಾಹನದಲ್ಲಿ ಬಳಸುವ ಉಪಕರಣ) ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!